Monday, May 21, 2007

ಥೂ...ಉಪ್ಪಿಟ್ಟಾ!!!!

"ಥೂ... ನನಿಗೆ ಇವತ್ತು ತಿಂಡಿ ಬೇಡ"....ನೆನಪಿಸಿಕೊಳ್ಳಿ, ನೀವು ಹೀಗೆ ಎಷ್ಟು ಸಲ ಹೇಳಿದ್ದೀರಾ? ಹೌದಲ್ವಾ ಪ್ರತಿ ಸಲ ಮನೇಲಿ ತಿಂಡಿ ಉಪ್ಪಿಟ್ಟು ಅಂಥ ಗೊತ್ತಾದ ತಕ್ಷಣ ಮೊದಲು ಉದುರುವ ನುಡಿ ಮುತ್ತುಗಳಿವು. ಯಾಕ್ರಿ ಆಶ್ಚರ್ಯ? ಅಷ್ಟು ಕರೆಕ್ಟಾಗಿ ಹೇಗೆ ಹೇಳಿದೆ ಅಂಥಾನ? ಈ ಉಪ್ಪಿಟ್ಟಿನ ಆಕ್ರಮಣ ಎದುರಿಸದೇ ಇರುವವರು ಯಾರ್ರಿ ಇದಾರೆ? "ಹೋಗಮ್ಮ ನೀನು ಯಾವಾಗ್ಲೂ ಉಪ್ಪಿಟ್ಟು ಮಾಡ್ತಿಯ....", ತಿಂಗಳಿಗೊಮ್ಮೆ ಉಪ್ಪಿಟ್ಟು ಮಾಡಿದ್ರೂ ನಾನು ಅದನ್ನು ಸಂಪೂರ್ಣವಾಗಿ ಪ್ರತಿಭಟಿಸುತ್ತಿದ್ದ ರೀತಿ ಇದು. ಒಂದರ್ಥದಲ್ಲಿ ಉಪ್ಪಿಟ್ಟು ಮನುಷ್ಯಮಾತ್ರದವರು ತಿನ್ನಲಾರದಂಥ/ತಿನ್ನಬಾರದಂಥ ವಸ್ತು ಎಂಬ ಖಚಿತ ನಿಲುವು... ನಮ್ಮಪ್ಪ ಅದಕ್ಕೊಂದು ಉಪನಾಮ (alias name) ಕೂಡ ಕೊಟ್ಟಿದ್ರು... Easy Tiffin of a Lazy Woman ಅಂಥ. ಹಾಸ್ಯಕವಿ ದುಂಡಿರಾಜ್ ಹೇಳ್ತಾರೆ...

ಅವನ ಮುಖ ಕಪ್ಪಿಟ್ಟಿತ್ತು....
ಏಕೆ?
ಏಕೆಂದರೆ ಎದುರಿಗೆ ಹೆಂಡತಿ ಮಾಡಿದ ಉಪ್ಪಿಟ್ಟಿತ್ತು.

ಉಪ್ಪಿಟ್ಟು ಸರ್ವರಿಂದಲೂ ಸಮಾನವಾಗಿ ದ್ವೇಶಿಸಲ್ಪಡುವುದು ಜಗಜ್ಜಾಹಿರವಾದ ಸಂಗತಿ... ನಮ್ಮಲ್ಲಿ ಹಲವರು ಅವಕಾಶವಿದ್ದಲ್ಲಿ ಉಪ್ಪಿಟ್ಟು ಮಾಡಿದವರ ಹಾಗೂ ಮಾಡುವವರ ಮೇಲೆ Attempt To Murder ಕೇಸ್ ಹಾಕುವ ಬಗ್ಗೆಯೂ ಯೋಚಿಸಿರಬಹುದು... Unfortunately ಅದು ಇಂದಿನ ಕಾನೂನು ವ್ಯವಸ್ಥೆಯಲ್ಲಿ ಆಗದಿರುವ ಸಂಗತಿ. ಯೋಚಿಸಿ ನೋಡಿ... ನೆನಪಿಸಿಕೊಳ್ಳಿ... ನೀವು ನಿಮ್ಮ ಹೆಂಡತಿಯೊಡನೆ ಜಗಳವಾಡಿದ ಮರುದಿನವೆಲ್ಲಾ ತಿಂಡಿ "ಉಪ್ಪಿಟ್ಟು" ಅಲ್ವಾ? ಒಂದೋ ಎರಡೋ ಬಾರಿಯಾಗಿದ್ರೆ ಕಾಕತಾಳೀಯ (coincidence) ಅನ್ನಬಹುದಿತ್ತು... ಆದರೆ ಪ್ರತಿ ಸಲವೂ ಜಗಳದ ಫಲ ಉಪ್ಪಿಟ್ಟು... So ಇದು ಒಂದು powerfull ಸೇಡಿನ ಅಸ್ತ್ರ ಅಂಥ ಎಂದೂ ನಿಮಗನ್ನಿಸಿಲ್ಲವೇ? ಇನ್ನು "ಹಂಗೇನಿಲ್ಲ... ಉಪ್ಪಿಟ್ಟು ನನಿಗೆ ತುಂಬಾ ಇಷ್ಟ" ಅನ್ನೋರು ಒಂದೋ ದಿನಾ ಜಗಳ ಆಡಿ ಮಾರನೇ ದಿನ ಉಪ್ಪಿಟ್ಟು ತಿಂದು ಅಭ್ಯಾಸ ಆಗಿರೋರು ಅಥವಾ ಪ್ರತಿಭಟನೆ ವ್ಯರ್ಥ ಪ್ರಯತ್ನ ಎಂದು ಅರಿವಾದ ಜಾಣರು...

ಆದ್ರೂ ಒಮ್ಮೊಮ್ಮೆ ನಮ್ಮೀ ಅಸಡ್ಡೆ ಪೂರ್ವಾಗ್ರಹಪೀಡಿತವಾದದ್ದು ಅಂಥ ಅನ್ನಿಸಿದ್ದೂ ಇದೆ... ಉಪ್ಪಿಟ್ಟಿನ ಬಗ್ಗೆ ನಮ್ಮೀ ಧೋರಣೆ ಹಾಗೂ ಪಕ್ಷಪಾತಗಳು ತಪ್ಪೆನಿಸಿದ್ದೂ ಇದೆ... ಯಾಕೆ ಅಂದ್ರೆ ಉಪ್ಪಿಟ್ಟು ಎಂದು ಮನೆಯಿಂದ ಮೂಗು ಮುರಿದು ತಿಂಡಿ ತಿನ್ನದೇ ತಪ್ಪಿಸಿಕೊಂಡು ಹೋಗಿ ಮತ್ತೆ canteenನಲ್ಲಿ ತಿನ್ತಾ ಇದ್ದಿದ್ದು ಅದೇ "ಖಾರಾ ಭಾತ್"(a better version of ಉಪ್ಪಿಟ್ಟು) ಅಷ್ಟೇ ಯಾಕೆ ನೀವು ಹೆಣ್ಣು ನೋಡಲು ಹೋದಾಗ ಸಿಕ್ಕಿದ್ದಿದ್ದೂ ಅದೇ "ಉಪ್ಪಿಟ್ಟು ಕಾಫಿ"(ನಿಮ್ ದುರದೃಷ್ಟ... ಆದ್ರೂ ಮದ್ವೆ ಆದ್ರಿ...) ಎಲ್ಲಾ Hotelಗಳ menuನಲ್ಲಿರೋ common and permanent item ಕೂಡಾ... So may be ತಿಳುವಳಿಕೆ ಬರೋ ಸಮಯದಲ್ಲಿ ಯಾರೋ ಉಪ್ಪಿಟ್ಟಿನ ಬಗ್ಗೆ ಮಾಡಿದ ಸುಳ್ಳು ಅಪವಾದವೊಂದು ನಮ್ಮ ಮನಸ್ಸಿನಲ್ಲಿ ಉಪ್ಪಿಟ್ಟಿನ ಬಗ್ಗೆ ಈ -ve imageನ್ನು ಸೃಷ್ಟಿಸಿರಬಹುದೆ?

ಜಾತಿ, ಮತ, ವರ್ಗ, ವರ್ಣ, ಗಂಡು, ಹೆಣ್ಣು ಎಂಬ ಭೇದವಿಲ್ಲದೇ ಎಲ್ಲರ ದುಃಸ್ವಪ್ನವಾಗಿರುವ ಉಪ್ಪಿಟ್ಟಿನ ಬಗ್ಗೆ ನನ್ನ ಮನಸ್ಸಿನಲ್ಲಿ ಈ ಸುನಾಮಿ ಅಲೆಗಳು ಎದ್ದಿದ್ದು New Jerseyಯ Indian Streetನ ಒಂದು South Indian Hotelನಲ್ಲಿ breakfastಗೆಂದು ಕೂತಾಗ... ಹೊರಗೆ ಸುರಿಯುತ್ತಿದ್ದ ಜಿಟಿ ಜಿಟಿ ಮಳೆ... ಕಿಟಕಿಯಿಂದ ಅದನ್ನೇ ಗುರಾಯಿಸುತ್ತಾ ಇದ್ದ ನಾನು... weekend ಹಾಳಾಗುವುದೆಂದೆಂಬ ಕಟು ಸತ್ಯ...ಆದರೆ ಏನೂ ಮಾಡಲಾಗದ ಆ ನಿಸ್ಸಹಾಯಕತೆ... ಇವೆಲ್ಲಾ ಒಂದಾಗಿ, ಏನೋ ವ್ಯಕ್ತಪಡಿಸಲಾಗದ ಒದ್ದಾಟಕ್ಕೆ ಕಾರಣವಾಗಿದ್ದವು...

ಅಂತ್ಯವಿಲ್ಲದ ಆಕಾಶದಂತೆ, ಲಂಗು ಲಗಾಮಿಲ್ಲದೆ ಸಾಗುತ್ತಿದ್ದ ನನ್ನ ಉಪ್ಪಿಟ್ಟಿನ ಬಗೆಗಿನ ಯೋಚನೆಗಳಿಗೆ ಪೂರ್ಣವಿರಾಮ ಇಡುವಂತೆ ಒಂದು ಗಡುಸಾದ ಧ್ವನಿ ನನ್ನೆಡೆಗೆ ತೂರಿ ಬಂತು... Supplierದು... ತನ್ನ ಕೈಲಿದ್ದ ತಟ್ಟೆ ಲೋಟಗಳನ್ನು ಕೆಳಗಿಡುತ್ತಾ ಆತ ಹೇಳಿದ್ದ...

"ತೊಗೊಳ್ಳಿ ಸಾ... ನೀವು order ಮಾಡಿದ್ದ ಉಪ್ಪಿಟ್ಟು ಮತ್ತು ಕಾಫಿ".

ಅದನ್ನ ಸವಿದು ಹೊರನಡೆಯುವಾಗ ಮಾತು ಬಾರದ ಮನಸ್ಸು ತಿಳಿ ಕಣ್ಣೀರ ಭಾಷೆಯಲಿ ಕೂಗಿ ಕೂಗಿ ಹೇಳುತ್ತಿತ್ತು..."ಆಮ್ಮಾ I miss u a lot... and of course ur ಉಪ್ಪಿಟ್ಟು also"

5 comments:

Unknown said...

Devaraneglu nija kano...Americadalli ade uppittu..madi bere avarige influence madtha idini ..tinni chenairuthe antha....

Unknown said...

shayama super baraha guru. Sakkath kushi aaythu. aadru nange uppit ista kano iethara complain naanu kadbu bagge maadtha idde.

Ganesha Lingadahalli said...

ಲೋ ಶ್ಯಾಮಾ.... ಇಷ್ಟ್ ದಿನ ಬೇಕಾಯ್ತಾ ನಿಂಗೆ, ಬ್ಲಾಗ್ ಶುರು ಮಾಡಕ್ಕೆ?....
ತುಂಬಾ ಚನ್ನಾಗಿ ಬರ್ದಿದೀಯ ಕಣೋ..

:) :) :) :) :) :) :) :) :) :)

ಹೀಗೇ ಬರೀತಾ ಇರು...
-ಡೀಲು

Sushrutha Dodderi said...

ಡುಂಡೀರಾಜರ ಹನಿ ಒರಿಜಿನಲಿ ಹೀಗಿದೆ:

ಕಾರಣ
ಪ್ರಿಯಾ, ನಿನ್ನ ಮುಖ
ಏಕೆ ಕಪ್ಪಿಟ್ಟಿದೆ?
ಏನು ಮಾಡಲಿ ಪ್ರಿಯೆ,
ಎದುರಿಗೆ ನೀನು
ಮಾಡಿಟ್ಟ ಉಪ್ಪಿಟ್ಟಿದೆ!

Sridhar Raju said...

ನಮಸ್ಕಾರ ಶ್ಯಾಮ್ ಅವರೇ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಶ್ರೀಧರ